Bharatha SarathiBharatha Sarathi
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್

Subscribe to Updates

Get the latest creative news from FooBar about art, design and business.

Facebook Twitter Instagram
Trending
  • E paper 01 oct 2023
  • E paper 30 sep 2023
  • E paper 29 sep 2023
  • E paper 27 sep 2023
  • E paper 26 sep 2023
  • E paper 22 sep 2023
  • E paper 22 sep 2023
  • E paper 21 sep 2023
Facebook Twitter Instagram
Bharatha SarathiBharatha Sarathi
AD 1
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್
Bharatha SarathiBharatha Sarathi
Home»ವಿಶೇಷವರದಿ»ಕಾರ್ಗಿಲ್ ಯುದ್ಧದ ಸಮಯದಲ್ಲಿ ದಿಟ್ಟತನ ಮೆರೆದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ
ವಿಶೇಷವರದಿ

ಕಾರ್ಗಿಲ್ ಯುದ್ಧದ ಸಮಯದಲ್ಲಿ ದಿಟ್ಟತನ ಮೆರೆದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ

August 3, 2022
Facebook Twitter Pinterest LinkedIn WhatsApp Reddit Email Telegram
Share
Facebook Twitter LinkedIn Pinterest Email Telegram WhatsApp

ಒಂದಲ್ಲಾ ಒಂದು ಪಿತೂರಿ ನಡೆಸುತ್ತಾ ನರಿ ಬುದ್ದಿಯನ್ನು ತೋರಿಸುತ್ತಾ ಬರುತ್ತಿರುವ ಪಾಕಿಸ್ತಾನದ ವಿರುದ್ಧ 1999ರ ಜುಲೈ ತಿಂಗಳಲ್ಲಿ ನಡೆದ ಕಾರ್ಗಿಲ್​ ಯುದ್ಧ (Kargil War)ದಲ್ಲಿ ಭಾರತ ಜಯಸಾಧಿಸಿತ್ತು. ಈ ಯುದ್ಧದ ನೆನಪಿಗಾಗಿ ಪ್ರತಿ ವರ್ಷ ಜು.26ರಂದು ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂದು ಭಾರತದ ಸೇನೆಯ ಹಿಂದೆ ನಿಂತಿದ್ದ ಮಾಜಿ ಪ್ರಧಾನಿ ದಿವಂತ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರನ್ನು ನೆನಪಿಸಲೇಬೇಕು. ಪಾಕ್ ಸೈನ್ಯದೊಂದಿಗೆ ಮಾತುಕತೆ ನಡೆಸದೆ “ನಾವು ಅವರನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೊರಹಾಕುತ್ತೇವೆ” ಎಂದು ಸ್ಪಷ್ಟವಾದ ಎಚ್ಚರಿಕೆಯನ್ನು ವಾಜಪೇಯಿ ಅವರು ನೀಡಿರುವುದು ನೆನಪಿಗೆ ಬರೆದೇ ಇರದು.

ಅದು 1999ರ ಮೇ ತಿಂಗಳು. ಭಾರತದ ವಿರುದ್ಧ ಒಳಸಂಚು ರೂಪಿಸಿದ ಪಾಕಿಸ್ತಾನ ತನ್ನ ಸೈನ್ಯವನ್ನು ಗಡಿ ನಿಯಂತ್ರಣ ರೇಖೆಗೆ ಕಳುಹಿಸಿತು. ಅದರಂತೆ ಒಳನುಸುಳಿದ ಪಾಕ್ ಸೈನ್ಯ ಕಾರ್ಗಿಲ್ ಪ್ರದೇಶದಲ್ಲಿ ಬೀಡುಬಿಟ್ಟತು. ಇದನ್ನು ಗಮನಿಸಿದ ಸ್ಥಳೀಯರು ಭಾರತದ ಸೈನ್ಯಕ್ಕೆ ಮಾಹಿತಿ ನೀಡಿದರು. ಅಷ್ಟರಲ್ಲಾಗಲೇ ಪಾಕ್ ಸೈನ್ಯ ಯುದ್ಧಕ್ಕೆ ತಯಾರಾಗಿತ್ತು. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ವಾಜಪೇಯಿ ನೇತೃತ್ವದ ಸರ್ಕಾರ, ನುಸುಳುಕೋರರಿಗೆ ಹಿಂದೆ ಸರಿಯುವಂತೆ ಎಚ್ಚರಿಸಿತು. “ನಾವು ಅವರನ್ನು ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಹೊರಹಾಕುತ್ತೇವೆ” ಎಂದು ವಾಜಪೇಯಿ ಅವರು ಖಡಕ್ ಆಗಿಯೇ ಹೇಳಿದ್ದರು. ಅದರಂತೆ ಭಾರತದ ಸರ್ಕಾರವು ಶತ್ರುಗಳು ಅಡಗಿರುವ ಪ್ರದೇಶಕ್ಕೆ ಸೈನ್ಯವನ್ನ ಕಳಿಸಿಯೇ ಬಿಟ್ಟಿತು.

ಫಿರಂಗಿಗಳ ಭಾರೀ ಬಳಕೆಯೊಂದಿಗೆ ಎರಡು ದೇಶಗಳು ಆರು ವಾರಗಳ ಕಾಲ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗಿದವು. ಈ ಯುದ್ಧದ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡು ವಾಜಪೇಯಿ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರೆದಿದ್ದರು ಎಂದು ಉಲ್ಲೇಖಿಸುವುದು ಸೂಕ್ತ. ಸರ್ಕಾರ ಪತನದಂಚಿನಲ್ಲಿದ್ದಾಗಲೂ ದೃತಿಗೆಡದ ವಾಜಪೇಟಿ ಸೈನ್ಯದ ಬೆನ್ನು ತಟ್ಟಿದರು. ಎರಡು ದೇಶಗಳ ನಡುವೆ ಭೀಕರ ಯುದ್ಧ ನಡೆಯುತ್ತದೆ.

ಯುದ್ಧದ ನಡುವೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಷ್, ಅಮೆರಿಕಾದ ಆಗಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರನ್ನು ಸಂಪರ್ಕಿಸಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಅದರಂತೆ ದೂರವಾಣಿ ಮೂಲಕ ಬಿಲ್ ಕ್ಲಿಂಟನ್ ಮಾತುಕತೆ ನಡೆಸಿದಾಗ, ಈ ಸಂದರ್ಭದಲ್ಲಿ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ವಾಜಪೇಯಿ ದೃಢವಾಗಿ ಹೇಳಿದರು. ಪರಿಣಾಮವಾಗಿ ಅಮೆರಿಕ ಮಾತುಕೆಯಿಂದ ಹಿಂದೆಸರಿಯಿತು.

ಯುದ್ಧ ಕೊನೆಗೊಳ್ಳುವ ಮುನ್ನವೇ ಭಾರತದ ಯಶಸ್ಸನ್ನು ಘೋಷಿಸಿದ ಪ್ರಧಾನಿ

ಯುದ್ಧದ ನಡುವೆ ಒಂದು ವಿಚಿತ್ರವಾದ ಸಂಗತಿಯೆಂದರೆ ಜುಲೈ 14 ರಂದು ವಾಜಪೇಯಿ ಅವರು ಕಾರ್ಯಾಚರಣೆಯ ಯಶಸ್ಸನ್ನು ಔಪಚಾರಿಕವಾಗಿ ಕೊನೆಗೊಳ್ಳುವ ದಿನಗಳ ಮೊದಲೇ ಘೋಷಿಸಿದ್ದರು. ಆ ದಿನ ಹರಿಯಾಣದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಮೇಲಿನ ಭಾರತದ ಯಶಸ್ಸನ್ನು ಮುಂಚಿತವಾಗಿ ಘೋಷಿಸಿದರು. ತರುವಾಯ ಜುಲೈ 26 ರಂದು ಪಾಕಿಸ್ತಾನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುವ ಮೂಲಕ ಭಾರತ ಕಾರ್ಗಿಲ್ ಯುದ್ಧವನ್ನು ಗೆದ್ದುಕೊಂಡಿತು.

Share. Facebook Twitter Pinterest LinkedIn Telegram Email
Previous Articleಈ ಬಾರಿಯ ರಕ್ಷಾ ಬಂಧನಕ್ಕೆ ಭದ್ರನ ನೆರಳು, ರಕ್ಷಾ ಬಂಧನದ ದಿನಾಂಕ, ಇತಿಹಾಸ, ಪ್ರಾಮುಖ್ಯತೆ ಇಲ್ಲಿದೆ
Next Article ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ ಜನ್ಮದಿನ; ಇಲ್ಲಿವೆ ಕೆಲವು ಕುತೂಹಲಕಾರಿ ಸಂಗತಿಗಳು

Related Posts

ಇನ್ಸ್ಪೆಕ್ಟರ್ ನಂದೀಶ್ ಸಾವಿನ ತನಿಖೆಗೆ ಎಚ್. ಡಿ. ಕೆ ಒತ್ತಾಯ

October 30, 2022

ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಆಸ್ತಿ ಹಂಚಿಕೆ ಏಕೆ ಬಹಳ ಮುಖ್ಯ -ರಿನಾ ನಥಾನಿ, ಮುಖ್ಯ ವ್ಯವಹಾರ ಅಧಿಕಾರಿ, ಕ್ವಾಂಟಮ್ ಎಎಂಸಿ.

October 20, 2022

ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪುಸ್ತಕ ಮುಕ್ತ ದಿನ

October 1, 2022
Ad 2
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Recent Posts

ನಾನು ಮಾಡೆಲ್ ಆಗಿದ್ದೇನೆ ಎಂದರೆ ಅದಕ್ಕೆ ಪ್ರೇರಣೆ ಕಿಚ್ಚ ಸುದೀಪ್ – ವಿನಯಾ ಗಣೇಶ್

November 18, 2022

ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ ನಟನೆಯಲ್ಲಿ ಬ್ಯುಸಿ

August 16, 2022

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪುಟ್ಟಕ್ಕನ ಮಗಳು

August 15, 2022

ಯಶಸ್ವಿ 200 ಸಂಚಿಕೆ ಪೂರೈಸಿದ ಮುದ್ದುಮಣಿಗಳು… ಶಿವು ಪಾತ್ರಧಾರಿ ಹೇಳಿದ್ದೇನು ಗೊತ್ತಾ?

September 19, 2022
About Us
About Us
Facebook Twitter YouTube
October 2023
M T W T F S S
 1
2345678
9101112131415
16171819202122
23242526272829
3031  
« Sep    
Latest Posts

E paper 01 oct 2023

E paper 30 sep 2023

E paper 29 sep 2023

© 2023 Bharatha Sarathi. Powered by FILMY SCOOP.

Type above and press Enter to search. Press Esc to cancel.