Bharatha SarathiBharatha Sarathi
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್

Subscribe to Updates

Get the latest creative news from FooBar about art, design and business.

Facebook Twitter Instagram
Trending
  • E paper 29 jan 2023
  • E paper 27 jan 2023
  • 26 jan 2023
  • E paper 25 jan 2023
  • E paper 24 jan 2023
  • E paper 22 jan 2023
  • E paper 21 jan 2023
  • E paper 20 jan 2023
Facebook Twitter Instagram
Bharatha SarathiBharatha Sarathi
AD 1
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್
Bharatha SarathiBharatha Sarathi
Home»News»ನಾಯಕನಿಗಿಂತ ಖಳನಾಯಕನಾಗಿ ಅಬ್ಬರಿಸುವುದೇ ಖುಷಿ – ಅನಿರುದ್ಧ್ ವೇದಾಂತಿ
News

ನಾಯಕನಿಗಿಂತ ಖಳನಾಯಕನಾಗಿ ಅಬ್ಬರಿಸುವುದೇ ಖುಷಿ – ಅನಿರುದ್ಧ್ ವೇದಾಂತಿ

September 10, 2022
Facebook Twitter Pinterest LinkedIn WhatsApp Reddit Email Telegram
Share
Facebook Twitter LinkedIn Pinterest Email Telegram WhatsApp

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸ್ಸೆಲ್ಲಾ ನೀನೆ ಧಾರಾವಾಹಿಯಲ್ಲಿ ನಾಯಕಿ ರಾಗಾಳನ್ನು ಮದುವೆಯಾಗುವ ಹುಡುಗ ವಿಶ್ವಾಸ್ ಆಗಿ ನಟಿಸುತ್ತಿರುವ ಅನಿರುದ್ಧ್ ವೇದಾಂತಿ ಅವರಿಗೆ ಬಾಲ್ಯದಿಂದಲೂ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಳ್ಳುವ ಬಯಕೆ. ನೂರೊಂದು ಸುಳ್ಳು ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಅನಿರುದ್ಧ್ ವೇದಾಂತಿ ಬಣ್ಣದ ಬದುಕಿಗೆ ಮುನ್ನುಡಿ ಬರೆದುದು ರಂಗಭೂಮಿ.

ನೂರೊಂದು ಸುಳ್ಳು ಧಾರಾವಾಹಿಯ ನಂತರ ವಿನು ಬಳಂಜ ನಿರ್ದೇಶನದ ನಿನ್ನೊಲುನೆಯಿಂದಲೇ ಧಾರಾವಾಹಿಯಲ್ಲಿ ಹಿರಿಮಗನ ಪಾತ್ರಕ್ಕೆ ಜೀವ ತುಂಬಿದ್ದರು. ನಂತರ ಪ್ರೀತಂ ಶೆಟ್ಟಿ ನಿರ್ದೇಶನದ ಮೀರಾ ಮಾಧವ ಧಾರಾವಾಹಿಯಲ್ಲಿ ಎರಡನೇ ಪ್ರಮುಖ ಪಾತ್ರ ಪ್ರಶಾಂತ್ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡಿರುವ ಅನಿರುದ್ಧ್ ವೇದಾಂತಿ ಅವರು ಯಶೋಧೆ, ಅಮ್ಮ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೃಹಲಕ್ಷ್ಮಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ಅನಿರುದ್ಧ್ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದರು.
ಮುಂದೆ ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಖಳನಾಯಕ ಆಗಿ ನಟಿಸಿದ್ದ ಅನಿರುದ್ಧ್ ಬಯಸದೇ ಬಳಿ ಬಂದೆ ಧಾರಾವಾಹಿಯಲ್ಲಿಯೂ ಖಳನಾಯಕ ಆಗಿ ಕಮಾಲ್ ಮಾಡಿದ್ದಾರೆ. ತದ ನಂತರ ಲಕ್ಷಣ ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದ ಅನಿರುದ್ಧ್ ಅವರಿಗೆ ವಿಲನ್ ಆಗಿ ಅಬ್ಬರಿಸುವುದೇ ಹೆಚ್ಚು ಖುಷಿಯಂತೆ. “ನನಗೆ ನಾಯಕ ಅದರಲ್ಲೂ ಲವರ್ ಬಾಯ್ ಆಗಿ ನಟಿಸುವುದಕ್ಕಿಂತ ಖಳನಾಯಕ ಆಗಿ ಅಬ್ಬರಿಸುವುದೇ ಹೆಚ್ಚು ಖುಷಿ ನೀಡುತ್ತದೆ. ಜೊತೆಗೆ ನೆಗೆಟಿವ್ ಪಾತ್ರದಲ್ಲಿ ಅಭಿನಯಕ್ಕೆ ಅವಕಾಶವೂ ಕೂಡಾ ಜಾಸ್ತಿ. ಇನ್ನು ಖಳನಾಯಕ ಎನ್ನುವ ಟೈಟಲ್ ಕೂಡಾ ದೊರೆಯುತ್ತದೆ” ಎಂದು ಹೇಳುತ್ತಾರೆ ಅನಿರುದ್ಧ್ ವೇದಾಂತಿ.

ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಅನಿರುದ್ಧ್ ವೇದಾಂತಿ ಅಭಿನಯಿಸಿದ ನಾಟಕಗಳಿಗೆ ಲೆಕ್ಕವಿಲ್ಲ. ಜಿ.ಬಿ.ಕೋಟೆಯವರ ಚಿಲಿಪಿಲಿ ತಂಡಕ್ಕೆ ಸೇರಿದ ಇವರು ಆರಂಭದಲ್ಲಿ ಫ್ಯಾಂಟಸಿ ಪಾತ್ರಗಳಲ್ಲಷ್ಟೇ ನಟಿಸುತ್ತಿದ್ದರು. ಯಾವುದೇ ಪಾತ್ರ ನೀಡಿದರೂ ನಿರಾಂತಕವಾಗಿ ಮಾಡುವಷ್ಟು ರಂಗಭೂಮಿಯಲ್ಲಿ ಪಳಗಿರುವ ಇವರು ಇದ್ದಂತೆ ಇರುವುದು ಲೇಸು ನಾಟಕದ ಗಾಳಿರಾಯನ ಪಾತ್ರ, ತುಕ್ಕೋಜಿ ಬುಕೋಜಿ ನಾಟಕದಲ್ಲಿ ಕಟ್ಟೆ ಭೂತು ಪಾತ್ರಗಳಲ್ಲಿ ಬಣ್ಣ ಹಚ್ಚಿದರು.

ರಂಗಸೌರಭ ಮತ್ತು ನವೋದಯ ಎಂಬ ನಾಟಕ ತಂಡಗಳಲ್ಲಿ ಗುರುತಿಸಿಕೊಂಡಿರುವ ಅನಿರುದ್ಧ್ ವೇದಾಂತಿ ಹಲಗಲಿ ಬೇಡರ ದಂಗೆ, ಊರು ಭಂಗ, ಮೈಸೂರು ಮಲ್ಲಿಗೆ, ಗಂಗಾವತರಣ, ಶಸ್ತ್ರ ಪರ್ವ, ಅನ್ನಾವತಾರ,ರೋಮಿಯೋ ಲವ್ಸ್ ಅನಾರ್ಕಲಿ, ಸಿಂಹಾಸಚಲನಂ ಸಂಪಿಗೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರತಿಭೆ.

ಕೊನೆ ಪುಟ ಮತ್ತು ಸತ್ವ ಎಂಬ ಕಿರುಚಿತ್ರಗಳಲ್ಲಿಯೂ ನಟಿಸಿರುವ ಇವರು ಜಿಂದಾ ಮತ್ತು ಟೋರಾ ಟೋರಾ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಇವರ ಅಭಿನಯದ ಹಾಸ್ಟೆಲ್ ಹುಡುಗರು ಹಾಗೂ ಒಂಭತ್ತು ಸುಳ್ಳು ಕಥೆಗಳು ಸಿನಿಮಾ ಬಿಡುಗಡೆಯಾಗಬೇಕಿದೆ.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ

Share. Facebook Twitter Pinterest LinkedIn Telegram Email
Previous ArticleE paper 10 sep 2022
Next Article E paper 11 sep 2022

Related Posts

E paper 29 jan 2023

January 29, 2023

E paper 27 jan 2023

January 27, 2023

26 jan 2023

January 26, 2023
Ad 2
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Recent Posts

ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ ನಟನೆಯಲ್ಲಿ ಬ್ಯುಸಿ

August 16, 2022

ನಾನು ಮಾಡೆಲ್ ಆಗಿದ್ದೇನೆ ಎಂದರೆ ಅದಕ್ಕೆ ಪ್ರೇರಣೆ ಕಿಚ್ಚ ಸುದೀಪ್ – ವಿನಯಾ ಗಣೇಶ್

November 18, 2022

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪುಟ್ಟಕ್ಕನ ಮಗಳು

August 15, 2022

ಯಶಸ್ವಿ 200 ಸಂಚಿಕೆ ಪೂರೈಸಿದ ಮುದ್ದುಮಣಿಗಳು… ಶಿವು ಪಾತ್ರಧಾರಿ ಹೇಳಿದ್ದೇನು ಗೊತ್ತಾ?

September 19, 2022
About Us
About Us
Facebook Twitter YouTube
February 2023
M T W T F S S
 12345
6789101112
13141516171819
20212223242526
2728  
« Jan    
Latest Posts

E paper 29 jan 2023

E paper 27 jan 2023

26 jan 2023

© 2023 Bharatha Sarathi. Powered by FILMY SCOOP.

Type above and press Enter to search. Press Esc to cancel.